ಕೃಷಿ ವಿಶ್ವವಿದ್ಯಾಲಯ ಧಾರವಾಡ, ಕರ್ನಾಟಕ
ಕೃಷಿಯು ದೇಶದ ಆರ್ಥಿಕತೆಯ ಮುಖ್ಯ ಆಧಾರವಾಗಿದ್ದು ಶೇಕಡಾ 70 ಕ್ಕಿಂತ ಹೆಚ್ಚು ಗ್ರಾಮೀಣ ಜನಸಂಖ್ಯೆ ಹಾಗು ಶೇಕಡಾ 50 ರಷ್ಟು ಜೀವನೋಪಾಯಕ್ಕಾಗಿ ಕೃಷಿಯನ್ನೇ ನಂಬಿಕೊಂಡಿದ್ದಾರೆ. ಭಾರತದಲ್ಲಿ ಕೃಷಿ ಉದ್ಯಮಗಳು ಮುನ್ನಡೆ ಸಾಧಿಸಿದರೂ, ಉತ್ತರ-ಕರ್ನಾಟಕದಲ್ಲಿ ಕೃಷಿ ನವೋದ್ಯಮ ಹೆಚ್ಚಿನ ಪ್ರಗತಿ ಕಾಣಬೇಕಾಗಿದೆ. ಈ ಭೂಪ್ರದೇಶವು ಕೃಷಿಗೆ ಮತ್ತು ಕೃಷಿತಂತ್ರಜ್ಞಾನಗಳ ಅಳವಡಿಕೆಗೆ ಪ್ರಕೃತಿದತ್ತವಾಗಿ ಹೆಚ್ಚಿನ ಅವಕಾಶಗಳನ್ನು ಹೊಂದಿದ್ದು ಕೃಷಿತಂತ್ರ ಜ್ಞಾನ ನವೋದ್ಯಮಗಳ ಕೆಲವು ಸಕಾರಾತ್ಮಕ ಪರಿಣಾಮಗಳು ಈ ಕೆಳಗಿನಂತಿವೆ.
- ಅ.ಗ್ರಾಮೀಣ ಕ್ಷೇತ್ರದಲ್ಲಿ ಖರೀದಿ ಮತ್ತು ಮಾರಾಟವನ್ನು ಪ್ರೋತ್ಸಾಹಿಸುವುದು.
- ಆ. ಸ್ಥಳೀಯವಾಗಿ ಒಪ್ಪಂದದ ಖರೀದಿ ಮತ್ತು ಒಪ್ಪಂದದ ಕೃಷಿ.
- ಇ. ಕೃಷಿ ಉತ್ಪನ್ನಗಳಿಗೆ ನಿರ್ಧಾರಿತ ಮಾರುಕಟ್ಟೆ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುವುದು
- ಈ.ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳಿಗೆ ಜನರ ವಲಸೆ ತಡೆಯುವುದು.
- ಉ. ರೈತರ ಅನಿಶ್ಚಿತತೆ ಮತ್ತು ಗ್ರಾಮೀಣ ಆರ್ಥಿಕತೆಯ ಸಮಸ್ಯೆಯನ್ನು ನಿರ್ಮೂಲನೆ ಮಾಡುವ ಮೂಲಕ ಗ್ರಾಮಗಳ ಸಮೃದ್ಧಿಯನ್ನು ಹೆಚ್ಚಿಸುವುದು.
ಉದ್ದೇಶಗಳು
- ನೂತನ ತಂತ್ರಜ್ಞಾನ / ಆಧಾರಿತ ತಳಿಗಳನ್ನು ಕೃಷಿ ನವೋದ್ಯಮ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಮೂಲಕ “ಪ್ರಯೋಗಾಲಯದಿಂದ ಕೃಷಿ ಭೂಮಿಗೆ” ಧ್ಯೇಯವನ್ನು ಸಾಧಿಸುವುದು.
- ಕೌಶಲ್ಯ ಅಭಿವೃದ್ಧಿ, ಸಾಮರ್ಥ್ಯ ವೃದ್ಧಿ, ಕೃಷಿ ಮತ್ತು ಸಂಬಂಧಿತ ವಲಯದಲ್ಲಿ ನಾವೀನ್ಯತೆ, ಉದ್ಯಮಶೀಲತೆ ಮತ್ತು ವ್ಯಾಪಾರ ದೃಷ್ಟಿಯನ್ನು ಉತ್ತೇಜಿಸುವುದು.
- ಗ್ರಾಮೀಣ ಪ್ರದೇಶಗಳ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು.
- ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿಗಳ ವಾಣಿಜ್ಯ್ ಕರಣಕ್ಕಾಗಿ ಸಮಗ್ರ ವಿಧಾನಗಳನ್ನು ಅಭಿವೃದ್ಧಿಗೊಳಿಸುವುದು.
- ಆರಂಭಿಕ ಕೃಷಿ- ಪರಿಸರ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿ, ತಾಂತ್ರಿಕ, ಕಾನೂನು, ಹಣಕಾಸು, ಬೌದ್ಧಿಕ ಆಸ್ತಿ ಮತ್ತು ಸಂಬಂಧಿತ ಸೇವೆಗಳನ್ನು ಒಳಗೊಂಡಂತೆ ಮೌಲ್ಯವರ್ಧಿತ ಸೇವೆಗಳಿಗೆ ಪ್ರೋತ್ಸಾಹಿಸುವುದು .
- ಕೃಷಿ ನವೋದ್ಯಮ ಕೈಗಾರಿಕೆ ಸ್ಥಾಪಿಸಲು ಹಣಕಾಸು ಸಹಾಯ ಸಂಭಂದಿತ ಸಂಸ್ಥೆಗಳ ಜಾಲವನ್ನು ಅಭಿವೃದ್ಧಿ ಪಡಿಸುವುದು.
- ಸದ್ಯ ಅಸ್ತಿತ್ವದಲ್ಲಿರುವ ಕೃಷಿ ನವೋದ್ಯಮ ಪೋಷಣ ಕೇಂದ್ರಗಳ ಸಾಮರ್ಥ್ಯವನ್ನು ಬಲಪಡಿಸುವುದು.
- ಸ್ಥಳೀಯ ಮತ್ತು ಜಾಗತಿಕ ಕೃಷಿ ವ್ಯವಹಾರ ಸವಾಲುಗಳನ್ನು ಸ್ಪರ್ಧಾತ್ಮಕವಾಗಿ ಎದುರಿಸಲು ಪರಿಹಾರವನ್ನು ಒದಗಿಸುವುದು.
ನಮ್ಮ ಪ್ರಗತಿ ಪಕ್ಷಿನೋಟ:
175 ಕೃಷಿ ನವೋದ್ಯಮಗಳಿಗೆ ತರಬೇತಿ
69 ಕೃಷಿ ನವೋದ್ಯಮಿಗಳಿಗೆ ಹಣಕಾಸಿನ ಅನುದಾನ
300+ ಉದ್ಯೋಗಗಳ ಸೃಷ್ಟಿ
90+ ಕೃಷಿ ನವೋದ್ಯಮಗಳಿಗೆ ಕಾರ್ಯಕ್ರಮಗಳು
ನಮ್ಮ ಸೇವೆಗಳು
ನವೋದ್ಯಮ ಪೋಷಣ
' ಕೃಷಿಕ್ ' ನವೋದ್ಯಮ ಪೋಷಣ ಕೇಂದ್ರವು ದೂರಗಾಮಿ ಕೃಷಿ ನವೋದ್ಯಮಗಳಿಗೆ ನವೀನ ಉತ್ಪನ್ನ ಹಾಗೂ ಸೇವೆಗಳನ್ನು ಪರಿಚಯಿಸಲು / ಬಿಡುಗಡೆ ಮಾಡಲು ಕೇಂದ್ರೀಕೃತ ಪರಿಹಾರ ಒದಗಿಸುತ್ತದೆ.
ಈ ಕೇಂದ್ರದಲ್ಲಿ ನವೋದ್ಯಮಗಳಿಗೆ ವಾಣಿಜ್ಯ, ಮಾರುಕಟ್ಟೆ ಹಾಗೂ ಹಣಕಾಸಿನ ವ್ಯವಸ್ಥೆಗಳನ್ನು ರೂಪಿಸಲು ಸಹಾಯವಾಗುವಂತೆ ಅವರಿಗೆ ಬೇಕಾಗುವ ತಂತ್ರಜ್ಞಾನ ನಿರ್ವಹಣೆ/ ಆಡಳಿತ ಹಾಗೂ ಕಾರ್ಯತಾಂತ್ರಿಕ ಸಲಹೆಗಳನ್ನು ಒದಗಿಸಲಾಗುತ್ತದೆ.
ಮಾರ್ಗದರ್ಶನ:
-
- ' ಕೃಷಿಕ್ ' ನವೋದ್ಯಮ ಪೋಷಣ ಕೇಂದ್ರವು ನವೋದ್ಯಮಗಳಿಗೆ ಹೂಡಿಕೆದಾರರ, ತಂತ್ರಜ್ಞಾನಿಗಳ ಹಾಗೂ ಸಲಹೆಗಾರರ ಮುಖಾಂತರ ಉನ್ನತಮಟ್ಟದ ಮಾರ್ಗದರ್ಶನವನ್ನು ಒದಗಿಸುತ್ತದೆ.
-
- ನವೋದ್ಯಮ ಕಾರ್ಯಕ್ರಮಗಳಲ್ಲಿ ಆಯ್ಕೆಗೊಂಡ ನವೋದ್ಯಮ ತಂಡಗಳು ನುರಿತ ಮಾರ್ಗದರ್ಶಕರ ಸಲಹೆ ಪಡೆದುಕೊಳ್ಳುತ್ತಾರೆ. ಮಾರ್ಗದರ್ಶಕರೊಂದಿಗೆ ದಿನನಿತ್ಯ ಕಾರ್ಯನಿರ್ವಹಿಸಿ, ಅವರ ಅನುಭವಗಳನ್ನು ಕೇಳಿಸಿಕೊಂಡು ಹಾಗೂ ಅವರ ಅಮೂಲ್ಯ ಒಳನೋಟಗಳು ಮತ್ತು ಪ್ರತಿಕ್ರಿಯೆಗಳನ್ನು ಸ್ವೀಕರಿಸಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ವಿಳಾಸ:
ಡಾ.ಎಸ್. ಎಸ್. ಡೊಳ್ಳಿ
ಪ್ರಧಾನ ಸಂಶೋಧಕರು ಹಾಗು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು,
ಕೃಷಿಕ್-ಕೃಷಿ ನವೋದ್ಯಮ ಪೋಷಣ ಕೇಂದ್ರ
ಕೃಷಿ ವಿಶ್ವವಿದ್ಯಾಲಯ ,
ಧಾರವಾಡ -580005 (ಕರ್ನಾಟಕ )
ಮಿಂಚಂಚೆ:
rabi@uasd.in
ದೂರವಾಣಿ:
0836-2214392